Tuesday, June 10, 2008

ನಾ ರಾಧೆ

ನಾ ರಾಧೆ
ಕೃಷ್ಣ ಎನ್ನೊಲವಿನ ಗಿರಿಧರ ನಾ ಬಲ್ಲೆ

ನೀ ನನ್ನೊಲವಿನ ಹಂದರ
ಕೃಷ್ಣನೊಲವಿನ ದೀವಿಗೆ ಹೊತ್ತಿ ಉರಿಯಲಿ ನನ್ನೆದೆಯ ವಿರಹವ ಮರೆಸಲಿ
ಓ ಉದ್ಧವ! ವಿಪ್ರಲಂಭದ ಹೊಳೆಯಲ್ಲಿ ಮುಳುಗುತ್ತಿರುವ ಎನಗೆ ರುಚಿಸೀತೆ ನಿನ್ನ ಗೊಡ್ಡು ಉಪದೇಶ?

ನೀನೇನು ಬಲ್ಲೆ ? ನೀನೆಷ್ಟು ಬಲ್ಲೆ ನಮ್ಮ ಶ್ರೀಧರನ?

ಅಂದು ತುಂಬಿದ ಸಭೆಯಲ್ಲಿ ನನ್ನತ್ತಿಗೆ ದ್ರೌಪದಿಯ ಮಾನ ರಕ್ಷಿಸಿದವ
ಕರೆಯದೇ ಬಂದ ಸುಧಾಮಗೆ ಮರೆಯಲಾರದ ಅನುಭವ ನೀಡಿದವ

ಅವನೆನ್ನ ಕಣ್ಣ !

ಅಂದು ಯಮುನೆಯ ತೀರದಲ್ಲಿ ನಾ ರಾಧೆಯಾಗಿ
ನಿನ್ನ ಕೊಳಲ ಮಧುರವಾಣಿಗೆ ಮುಖ ಗೀತೆಯಾಗಿ
ಹಾಡಿ ಕುಣಿದದ್ದು ಸುಳ್ಳು ಏನೋ ಕಣ್ಣಾ?
ಬದಲಗಾಬಾರದೋ ಹೀಗೆ ನಿನ್ನೊಲವ ಬಣ್ಣ

ಇಂದು ಎನ್ನ ವಿರಹಕ್ಕೆ ಮರು ದನಿ ಯೇ ಇಲ್ಲದೇ
ಬರೀ ಕಲ್ಲಾದುದು ಏಕೆಂದು ಈ ಜೀವ ಬಲ್ಲುದೆ?
ಬಾ ಬಾರ ನನ್ನ ಬದುಕ ಭರವಸೆಯೇ ಬಾ ಬಂದು ಸೇರ ಮಹಿ ಒಲವ ಗಿರಿಧಾರಿಯೇ
(ಇದು ಮೀರಾ ಭಜನ್ ನಿಂದ ಆಕರ್ಷಿತಳಾಗಿ ರಚಿಸಿದ ಗೀತೆ)

No comments:

Post a Comment