ನಾ ರಾಧೆ
ಕೃಷ್ಣ ಎನ್ನೊಲವಿನ ಗಿರಿಧರ ನಾ ಬಲ್ಲೆ
ನೀ ನನ್ನೊಲವಿನ ಹಂದರ
ಕೃಷ್ಣನೊಲವಿನ ದೀವಿಗೆ ಹೊತ್ತಿ ಉರಿಯಲಿ ನನ್ನೆದೆಯ ವಿರಹವ ಮರೆಸಲಿ
ಓ ಉದ್ಧವ! ವಿಪ್ರಲಂಭದ ಹೊಳೆಯಲ್ಲಿ ಮುಳುಗುತ್ತಿರುವ ಎನಗೆ ರುಚಿಸೀತೆ ನಿನ್ನ ಗೊಡ್ಡು ಉಪದೇಶ?
ನೀನೇನು ಬಲ್ಲೆ ? ನೀನೆಷ್ಟು ಬಲ್ಲೆ ನಮ್ಮ ಶ್ರೀಧರನ?
ಅಂದು ತುಂಬಿದ ಸಭೆಯಲ್ಲಿ ನನ್ನತ್ತಿಗೆ ದ್ರೌಪದಿಯ ಮಾನ ರಕ್ಷಿಸಿದವ
ಕರೆಯದೇ ಬಂದ ಸುಧಾಮಗೆ ಮರೆಯಲಾರದ ಅನುಭವ ನೀಡಿದವ
ಅವನೆನ್ನ ಕಣ್ಣ !
ಅಂದು ಯಮುನೆಯ ತೀರದಲ್ಲಿ ನಾ ರಾಧೆಯಾಗಿ
ನಿನ್ನ ಕೊಳಲ ಮಧುರವಾಣಿಗೆ ಮುಖ ಗೀತೆಯಾಗಿ
ಹಾಡಿ ಕುಣಿದದ್ದು ಸುಳ್ಳು ಏನೋ ಕಣ್ಣಾ?
ಬದಲಗಾಬಾರದೋ ಹೀಗೆ ನಿನ್ನೊಲವ ಬಣ್ಣ
ಇಂದು ಎನ್ನ ವಿರಹಕ್ಕೆ ಮರು ದನಿ ಯೇ ಇಲ್ಲದೇ
ಬರೀ ಕಲ್ಲಾದುದು ಏಕೆಂದು ಈ ಜೀವ ಬಲ್ಲುದೆ?
ಬಾ ಬಾರ ನನ್ನ ಬದುಕ ಭರವಸೆಯೇ ಬಾ ಬಂದು ಸೇರ ಮಹಿ ಒಲವ ಗಿರಿಧಾರಿಯೇ
(ಇದು ಮೀರಾ ಭಜನ್ ನಿಂದ ಆಕರ್ಷಿತಳಾಗಿ ರಚಿಸಿದ ಗೀತೆ)
No comments:
Post a Comment